Wednesday, 31 August 2016

: ವಾರದ ಪ್ರಶ್ನೆಗಳ ಉತ್ತರಗಳು

1) ಭಾರತ ದೇಶದಲ್ಲಿಯೇ ಕರ್ನಾಟಕ ರಾಜ್ಯವು ನಗರೀಕರಣದಲ್ಲಿ ಯಾವ: ಸ್ಥಾನವನ್ನು ಹೊಂದಿದೆ? j

A). ಮೊದಲ ಸ್ಥಾನ
B). ನಾಲ್ಕನೇ ಸ್ಥಾನ
C). ಐದನೇ ಸ್ಥಾನ
D). ಏಳನೇ ಸ್ಥಾನ

Correct Ans: (D)
Description: ದೇಶದಲ್ಲಿಯೇ ನಗರೀಕರಣದಲ್ಲಿ ಕರ್ನಾಟಕ ರಾಜ್ಯವು ಏಳನೇ ಸ್ಥಾನವನ್ನು ಹೊಂದಿದೆ.

2) ಪ್ರಸ್ತುತ ಕೇರಳ ರಾಜ್ಯದ ಮುಖ್ಯಮಂತ್ರಿಗಳು ಯಾರು?

A). ಲಕ್ಷ್ಮೀ ಕಾಂತ್ ಪರ್ಸೇಕರ್
B). ಪಿಣರಾಯಿ ವಿಜಯನ್
C). ಗೋಪಾಲ್ ಸ್ವಾಮಿ
D). ಪಿ. ಸದಾಶಿವಂ

Correct Ans: (B)
Description: ಪಿಣರಾಯಿ ವಿಜಯನ್ ಅವರು ಕೇರಳದ ಪ್ರಸ್ತುತ ಮುಖ್ಯಮಂತ್ರಿಗಳಾಗಿದ್ದಾರೆ.

3) 23 ನೇ ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪುರಸ್ಕಾರಕ್ಕೆ ಆಯ್ಕೆಯಾದವರು ಯಾರು?

A). ಶ್ರೀಶೈಲ ಕುಮಾರ
B). ರವಿ ಅಗರವಾಲ್
C). ಶುಭಾ ಮುದಗಲ್
D). ಇವರಾರೂ ಅಲ್ಲ

Correct Ans: (C)
Description: ಶುಭಾ ಮುದಗಲ್ ಅವರು 23 ನೇ ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

4) ಇತ್ತೀಚೆಗೆ ನಿಧನರಾದ ಅಹ್ಮದ್ ಜೆವೈಲ್ ಅವರು ಯಾವ ವಿಷಯಕ್ಕೆ ಸಂಬಂಧಿಸಿದಂತೆ ನೊಬೆಲ್ ಬಹುಮಾನವನ್ನು ಪಡೆದಿದ್ದರು?

A). ಗಣಿತಶಾಸ್ತ್ರ
B). ರಸಾಯನಶಾಸ್ತ್ರ
C). ಭೌತಶಾಸ್ತ್ರ
D). ಮನಶ್ಯಾಸ್ತ್ರ

Correct Ans: (B)
Description: ಇವರು ರಸಾಯನಶಾಸ್ತ್ರದಲ್ಲಿ ನೊಬೆಲ್ ಬಹುಮಾನವನ್ನು ಪಡೆದುಕೊಂಡಿದ್ದರು. ಇವರು ಫೆಬ್ರುವರಿ 26, 1946 ರಲ್ಲಿ ಜನಿಸಿದ್ದರು. ಅಗಷ್ಟ್ 2, 2016 ರಲ್ಲಿ ನಿಧನ ಹೊಂದಿದ್ದಾರೆ.

5) ದೇಶದ ಮೊದಲ ‘ಟೈಗರ್ ಸೆಲ್’ (ಹುಲಿ ಕೋಣೆ) ಎಲ್ಲಿ ತಲೆಯೆತ್ತಲಿದೆ?

A). ಮಧ್ಯಪ್ರದೇಶ
B). ಉತ್ತರಾಂಚಲ್
C). ದೆಹಲಿ
D). ಡೆಹರಾಡೂನ್

Correct Ans: (D)
Description: ಉತ್ತರಾಖಂಡದ ಡೆಹರಾಡೂನ್ನಲ್ಲಿರುವ ಭಾರತೀಯ ವನ್ಯಜೀವಿ ಸಂಸ್ಥೆಯ ಕ್ಯಾಂಪಸ್ನಲ್ಲಿ ದೇಶದ ಮೊದಲ ‘ಟೈಗರ್ ಸೆಲ್’ (ಹುಲಿ ಕೋಣೆ) ತಲೆಯೆತ್ತಲಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಮತ್ತು ರಾಜ್ಯ ಸರ್ಕಾರ ಶನಿವಾರ ಒಪ್ಪಂದಕ್ಕೆ ಸಹಿ ಮಾಡಿವೆ ಎಂದು ಮೂಲಗಳಿಂದ ಗೊತ್ತಾಗಿದೆ. ಭಾರತೀಯ ವನ್ಯಜೀವಿ ಸಂಸ್ಥೆಯ ಕ್ಯಾಂಪಸ್ಗೆ ಹೊಂದಿಕೊಂಡಿರುವ ಜಾಗದಲ್ಲಿ ಟೈಗರ್ ಸೆಲ್ ನಿರ್ಮಿಸಲಾಗುತ್ತಿದ್ದು, ಇಲ್ಲಿ ಹುಲಿಗಳ ಸಂತತಿ ಹೆಚ್ಚಳಕ್ಕೆ ವಿಶೇಷವಾದ ಕಾರ್ಯಾಚರಣೆಗೆ ಯೋಜನೆಗಳು ರೂಪಗೊಳ್ಳಲಿವೆ. ಜತೆ ಜೊತೆಗೆ ಹುಲಿ ಸಂತತಿಗೆ ಸಂಬಂಧಿಸಿದ ಎಲ್ಲಾ ರೀತಿಯ ಅಂಕಿ-ಅಂಶಗಳ ದಾಖಲೆಗಳು ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಜತೆ ಜೊತೆಗೆ ರಾಜ್ಯದಲ್ಲಿನ 50 ಹುಲಿಧಾಮಗಳಲ್ಲಿನ ಹುಲಿಗಳ ಡಿಎನ್ಎ ಸ್ಯಾಂಪಲ್ಗಳು ಇಲ್ಲಿ ಲಭ್ಯವಿರಲಿದೆ. ದೇಶದಲ್ಲಿ ಎಲ್ಲಿಯೇ ಹುಲಿ ಬೇಟೆ ಆದರೂ ಇಲ್ಲಿ ದಾಖಲಾಗಿರುವಂತೆ ಮತ್ತು ಕೃತ್ಯಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.

6) ಗುಜರಾತ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದವರು ಯಾರು?

A). ವಿಜಯ್ ರೂಪಾನಿ
B). ನಿತಿನ್ ಪಟೇಲ್
C). ಗೌರವ ಪಟೇಲ್
D). ಸುಶೀಲ್ ಮೋಹಿತೆ

Correct Ans: (A)
Description: ವಿಜಯ್ ರೂಪಾನಿ ಅವರು ಗುಜರಾತಿನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ನಿತಿನ್ ಪಟೇಲ್ ಅವರು ರಾಜ್ಯದ ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಶುಕ್ರವಾರ ಪಕ್ಷದ ಶಾಸಕಾಂಗ ಸಭೆಯಲ್ಲಿ ರೂಪಾನಿ ಅವರನ್ನು ನೂತನ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಹಿರಿಯ ನಾಯಕ ನಿತಿನ್ ಗಡ್ಕರಿ ವೀಕ್ಷಕರಾಗಿ ಸಭೆಯಲ್ಲಿ ಪಾಲ್ಗೊಂಡಿದ್ದರು. ವಿಜಯ್ ರೂಪಾನಿ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದು, ಆನಂದಿಬೆನ್ ಅವರ ಸಂಪುಟದಲ್ಲಿ ಸಾರಿಗೆ, ನೀರು ಸರಬರಾಜು, ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿದ್ದರು.

7) ಕೂಡಂಕುಳಂ ಅಣುವಿದ್ಯುತ್ ಸ್ಥಾವರ ಯೋಜನೆಯು ಯಾವ ರಾಷ್ಟ್ರದ ಸಹಯೋಗದೊಂದಿಗೆ ಸ್ಥಾಪಿಸಲಾಗಿದೆ?

A). ಅಮೇರಿಕಾ
B). ರಷ್ಯಾ
C). ಚೀನಾ
D). ಜಪಾನ್

Correct Ans: (B)
Description: ಸ್ವಚ್ಛ ಇಂಧನ ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನ ಭಾರತದ ಪ್ರಯತ್ನಗಳಿಗೆ ಕೂಡಂಕುಳಂ 1 ಅಣು ವಿದ್ಯುತ್ ಸ್ಥಾವರವು ಮಹತ್ವದ ಸೇರ್ಪಡೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದರು. ಭಾರತ – ರಷ್ಯಾ ಮೈತ್ರಿ ದೀರ್ಘಕಾಲೀನದ್ದಾಗಲಿ ಪ್ರಧಾನಿ ಹಾರೈಸಿದರು.

8) "ಫ್ಲೈಯಿಂಗ್ ಫಿಶ್" ಎಂದೇ ಖ್ಯಾತಿ ಪಡೆದ ಅಮೆರಿಕದ ಈಜು ಪಟು ಯಾರು?

A). ಮೈಕಲ್ ಕ್ಲಾರ್ಕ್
B). ಮೆಸ್ಸಿ ಕ್ಲಾರ್ಕ್
C). ಮೈಕಲ್ ಫೆಲ್ಪ್ಸ್
D). ಇವರಾರೂ ಅಲ್ಲ

Correct Ans: (C)
Description: ಫ್ಲೈಯಿಂಗ್ ಫಿಶ್ ಎಂದೇ ಖ್ಯಾತಿ ಪಡೆದ ಅಮೆರಿಕದ ಮೈಕಲ್ ಫೆಲ್ಪ್ಸ್ ಭಾನುವಾರ ಮುಂಜಾನೆ ನಡೆದ 4100 ಮೀಟರ್ ಬಟರ್ ಫ್ಲೈ ಮೆಡ್ಲೆ ವಿಭಾಗದಲ್ಲಿ ಸ್ವರ್ಣ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಪ್ರಸಕ್ತ ಒಲಿಂಪಿಕನ್ಲ್ಲಿ ಐದನೇ ಪದಕದೊಂದಿಗೆ ತಮ್ಮ ಅಭಿಯಾನ ಅಂತ್ಯಗೊಳಿಸಿದ್ದಾರೆ. 31ರ ಹರೆಯದ ಫೆಲ್ಪ್ಸ್ ಒಲಿಂಪಿಕ್ನಲ್ಲಿ ಒಟ್ಟು 28 ಪದಕ ಬೇಟೆಯಾಡಿದ ಸಾಧನೆ ಮಾಡಿದ್ದು, ಇದರಲ್ಲಿ 23 ಸ್ವರ್ಣ ಪದಕ ಸೇರಿದೆ. ಫೆಲ್ಪ್ಸ್ ನೇತೃತ್ವದ ರಿಲೇ ತಂಡ 3:27.95 ನಿಮಿಷಕ್ಕೆ ನಿಗದಿತ ಗುರಿ ತಲುಪಿ ದಾಖಲೆ ಬರೆದರು. ಇಲ್ಲಿಯವರೆಗೂ ಅಮೆರಿಕ ಮೆಡ್ಲೆ ರಿಲೇ ವಿಭಾಗದಲ್ಲಿ ಒಂದು ಪದಕ ಜಯಿಸಿರಲಿಲ್ಲ.

9) 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಸತತ ಮೂರು ಬಾರಿ 100 ಮೀಟರ್ ಓಟದ ಚಾಂಪಿಯನ್ ಆದ ಮೊಟ್ಟಮೊದಲಿಗರು ಯಾರು?

A). ಪಿ.ಟಿ ಉಷಾ
B). ಜಸ್ಟಿನ್ ಗಾಟ್ಲಿನ್
C). ಉಸೇನ್ ಬೋಲ್ಟ್
D). ಆಂಡ್ರೆ ಡಿ ಗ್ರಾಸ್ಸೆ

Correct Ans: (C)
Description: ಮಿಂಚಿನ ಓಟಗಾರ ಉಸೇನ್ ಬೋಲ್ಟ್ ರಿಯೋ ಒಲಿಂಪಿಕ್ಸ್ನಲ್ಲೂ 100 ಮೀಟರ್ ಓಟದಲ್ಲಿ ನಿರೀಕ್ಷೆಯಂತೆಯೇ ಸ್ವರ್ಣ ಪದಕಕ್ಕೆ ಕೊರಳೊಡ್ಡುವ ಮೂಲಕ ಇತಿಹಾಸ ಬರೆದಿದ್ದಾರೆ. 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಸತತ ಮೂರು ಬಾರಿ 100 ಮೀಟರ್ ಓಟದ ಚಾಂಪಿಯನ್ ಆದ ಮೊಟ್ಟಮೊದಲಿಗರೆಂಬ ದಾಖಲೆ ಯೊಂದಿಗೆ ವಿಜೃಂಭಿಸಿದ್ದಾರೆ. ಒಲಿಂಪಿಕ್ಸ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ (ಭಾರತೀಯ ಕಾಲಮಾನ ಸೋಮವಾರ ಬೆಳಗ್ಗೆ) ಸ್ಪರ್ಧೆಯಲ್ಲಿ ಜಮೈಕಾ ಸ್ಟಾರ್ ಬೋಲ್ಟ್ 9.81 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿದರೆ, ಅವರ ನಿಕಟ ಪ್ರತಿಸ್ಪರ್ಧಿ ಅಮೆರಿಕದ ಜಸ್ಟಿನ್ ಗಾಟ್ಲಿನ್ 9.89 ಸೆಕೆಂಡ್ಗಳಲ್ಲಿ ಓಡಿ ರಜತ ಪದಕ ಗೆದ್ದರು. ಕೆನಡದ ಆಂಡ್ರೆ ಡಿ ಗ್ರಾಸ್ಸೆ 9.91 ಸೆಕೆಂಡ್ಗಳಲ್ಲಿ ಓಡಿ ಕಂಚಿನ ಪದಕ ಪಡೆದರು. ಲಂಡನ್ನಲ್ಲಿ ರಜತ ಗೆದ್ದಿದ್ದ ಜಮೈಕಾದ ಮತ್ತೋರ್ವ ಅಥ್ಲೀಟ್ ಯೊಹಾನ್ ಬ್ಲೇಕ್ ಈ ಬಾರಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ಮುನ್ನ ಸೆಮಿಫೈನಲ್ನಲ್ಲಿ ಬೋಲ್ಟ್ 9.86 ಸೆಕೆಂಡ್ಗಳಲ್ಲಿ ಓಡಿದ್ದರು.

10) ಒಲಿಂಪಿಕ್ಸ್ ಪುರುಷರ ಟೆನಿಸ್ ಸಿಂಗಲ್ಸ್ನಲ್ಲಿ ಎರಡು ಸ್ವರ್ಣ ಪದಕ ಗೆದ್ದ ವಿಶ್ವದ ಮೊದಲ ಆಟಗಾರ ಯಾರು?

A). ಆಂಡಿ ಮರ್ರೆ
B). ರಾಫೆಲ್ ನಡಾಲ್
C). ವೀನಸ್ ವಿಲಿಯಮ್ಸ್
D). ನೋವಾಕ್ ಜೋಕೋವಿಕ್

Correct Ans: (A)
Description: ಹಾಲಿ ವಿಂಬಲ್ಡನ್ ಚಾಂಪಿಯನ್ ಆಂಡಿ ಮರ್ರೆ ಒಲಿಂಪಿಕ್ಸ್ ಪುರುಷರ ಟೆನಿಸ್ ಸಿಂಗಲ್ಸ್ನಲ್ಲಿ ಎರಡು ಸ್ವರ್ಣ ಪದಕ ಗೆದ್ದ ವಿಶ್ವದ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇನ್ನೊಂದೆಡೆ ರಾಫೆಲ್ ನಡಾಲ್ ಕಂಚಿನ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರೆ, ಅಮೆರಿಕ ಆಟಗಾರ್ತಿ ವೀನಸ್ ವಿಲಿಯಮ್್ಸ 5ನೇ ಒಲಿಂಪಿಕ್ಸ್ ಚಿನ್ನದ ಪದಕ ಗೆಲ್ಲಲು ವಿಫಲರಾದರು.

11) ಅಸ್ಸಾಂನ ನೂತನ ರಾಜ್ಯಪಾಲರು ಯಾರು?

A). ಜಗದೀಶ್ ಮುಖಿ
B). ವಿ.ಪಿ. ಸಿಂಗ್
C). ಬನ್ವಾರಿ ಲಾಲ್ ಪುರೋಹಿತ್
D). ಇವರಾರೂ ಅಲ್ಲ

Correct Ans: (C)
Description: ಅಂಡಮಾನ್ ನಿಕೋಬಾರ್ ದ್ವೀಪದ ನೂತನ ಲೆಫ್ತಿನೆಂಟ್ ಗವರ್ನರ್ ಸ್ಥಾನಕ್ಕೆ ಬಿಜೆಪಿ ನಾಯಕ ಜಗದೀಶ್ ಮುಖಿ, ಪಂಜಾಬ್ನ ನೂತನ ರಾಜ್ಯಪಾಲ ಸ್ಥಾನಕ್ಕೆ ವಿ.ಪಿ. ಸಿಂಗ್ ಬದ್ನೋರ್ ಮತ್ತು ಅಸ್ಸಾಂನ ನೂತನ ರಾಜ್ಯಪಾಲ ಸ್ಥಾನಕ್ಕೆ ಬನ್ವಾರಿ ಲಾಲ್ ಪುರೋಹಿತ್ ಅವರನ್ನು ನೇಮಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಹೇಳಿಕೆ ತಿಳಿಸಿದೆ.

12) ನಜ್ಮಾ ಹೆಪ್ತುಲ್ಲಾ ಪ್ರಸ್ತುತ ಯಾವ ರಾಜ್ಯದ ರಾಜ್ಯಪಾಲರಾಗಿದ್ದಾರೆ?

A). ಮಧ್ಯಪ್ರದೇಶ
B). ರಾಜಸ್ಥಾನ
C). ಮಣಿಪುರ
D). ಮೇಘಾಲಯ

Correct Ans: (C)
Description: ಮಾಜಿ ಕೇಂದ್ರ ಸಚಿವೆ ನಜ್ಮಾ ಹೆಪ್ತುಲ್ಲಾ ಅವರನ್ನು ಮಣಿಪುರದ ನೂತನ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಕೇಂದ್ರ ಸಚಿವೆಯಾಗಿದ್ದ ನಜ್ಮಾ ಹೆಪ್ತುಲ್ಲಾ ಅವರನ್ನು 75 ವಯಸ್ಸು ದಾಟಿದ ಹಿನ್ನೆಲೆಯಲ್ಲಿ ಕಳೆದ ಜುಲೈ ತಿಂಗಳಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಪುನಾರಚನೆ ಕಾಲದಲ್ಲಿ ಸಂಪುಟದಿಂದ ಕೈಬಿಡಲಾಗಿತ್ತು.

13) ಕರ್ನಾಟಕದ ಸಾಹಿತಿ ಬಿ.ಎ ಸನದಿಯವರು 2015 ನೇ ಸಾಲಿನ .................. ಪದಕ ವಿಜೇತರಾಗಿದ್ದಾರೆ.

A). ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
B). ಪ್ಪಂಪ ಪ್ರಶಸ್ತಿ
C). ಜ್ಞಾನಪೀಠ ಪ್ರಶಸ್ತಿ
D). ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Correct Ans: (B)
Description: ಕರ್ನಾಟಕದ ಸಾಹಿತಿ ಬಿ.ಎ ಸನದಿಯವರು 2015 ನೇ ಸಾಲಿನ ಪ್ಪಂಪ ಪ್ರಶಸ್ತಿ ಪದಕ ವಿಜೇತರಾಗಿದ್ದಾರೆ.

14) ರಿಯೋ ಡಿ ಜನೈರೋ ಒಲಂಪಿಕ್ ನಲ್ಲಿ ಸಾಕ್ಷಿ ಮಾಲಿಕ್ ಅವರು ಗೆದ್ದದ್ದು ....?

A). ಚಿನ್ನದ ಪದಕ
B). ಬೆಳ್ಳಿಯ ಪದಕ
C). ಕಂಚಿನ ಪದಕ
D). ಯಾವುದೂ ಇಲ್ಲ

Correct Ans: (C)
Description: ‘ಹನ್ನೆರಡು ವರ್ಷಗಳ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಇದು. ನನಗಿಂತ ಹಿರಿಯರಾದ ಗೀತಾ ದೀದಿ ಲಂಡನ್ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ನಾನೀಗ ಪದಕ ಗೆದ್ದಿದ್ದೇನೆ. ಒಲಿಂಪಿಕ್ಸ್ ಮಹಿಳಾ ಕುಸ್ತಿಯಲ್ಲಿ ಪದಕ ಗೆದ್ದ ಮೊದಲ ಭಾರತೀಯೆ ನಾನಾಗುತ್ತೇನೆ ಎಂದು ಕನಸು-ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ’ ಹೀಗೆಂದು ಹೇಳಿದ್ದು ರಿಯೋ ಅಂಗಳದಲ್ಲಿ ಕಂಚಿನ ಪದಕ ಗೆದ್ದುಕೊಂಡ ಸಾಕ್ಷಿ ಮಾಲಿಕ್.

15) ಅಖಿಲ ಭಾರತ 82ನೇ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಲಿದೆ?

A). ಕೊಪ್ಪಳ
B). ಗುಲ್ಬರ್ಗಾ
C). ರಾಯಚೂರು
D). ಹಾವೇರಿ

Correct Ans: (C)
Description: ‘ಅಖಿಲ ಭಾರತ 82ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಲಹಾ ಸಮಿತಿ ನೇಮಕ ಮಾಡಲಾಗಿದ್ದು, ಬೆಂಗಳೂರಿನಲ್ಲಿ ಆ.27ರಂದು ಸಮಿತಿಯ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ.ಮನು ಬಳಿಗಾರ ಹೇಳಿದರು.

16) ಪ್ರಸಕ್ತ ಸಾಲಿನ ಡಿ. ದೇವರಾಜ ಅರಸು ಪ್ರಶಸ್ತಿಗೆ ಯಾರನ್ನು ಆಯ್ಕೆ ಮಾಡಲಾಗಿದೆ?

A). ಎಸ್.ಆರ್ ಬೊಮ್ಮಾಯ್
B). ಎಚ್.ಡಿ ದೇವೇಗೌಡ
C). ಮಾಜಿ ಸಚಿವ ಬಿ.ಎ. ಮೊಹಿದ್ದೀನ್
D). ಇವರಾರೂ ಅಲ್ಲ

Correct Ans: (C)
Description: ಪ್ರಸಕ್ತ ಸಾಲಿನ ಡಿ. ದೇವರಾಜ ಅರಸು ಪ್ರಶಸ್ತಿಗೆ ಮಾಜಿ ಸಚಿವ ಬಿ.ಎ. ಮೊಹಿದ್ದೀನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ತಿಳಿಸಿದ್ದಾರೆ. ಆ. 20ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಅರಸು 101ನೇ ಜನ್ಮದಿನ ಮತ್ತು ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

17) ಬ್ಯಾಡ್ಮಿಂಟನಲ್ಲಿ ಪಿ.ವಿ ಸಿಂಧುವಿನೊಂದಿಗೆ ಸೆಣೆಸಾಡಿ ಚಿನ್ನದ ಪದಕ ಗೆದ್ದ ವಿಶ್ವದ ಅಗ್ರ ಶ್ರೇಯಾಂಕಿತೆ ಕ್ಯಾರೊಲಿನ್ ಮರಿನ್ ಯಾವ ದೇಶದವರು?

A). ಜಪಾನ್
B). ಚೀನಾ
C). ಅಮೇರಿಕಾ
D). ಸ್ಪೇನ್

Correct Ans: (D)
Description: ವಿಶ್ವದ ಅಗ್ರ ಶ್ರೇಯಾಂಕಿತೆ ಸ್ಪೇನ್ನ ಕ್ಯಾರೊಲಿನ್ ಮರಿನ್ ಸ್ಪೇನ್ ದೇಶದವರಾಗಿದ್ದಾರೆ.

18) ’ಗಿವ್ ಇಟ್ ಅಪ್’ ಯೋಜನೆಯಲ್ಲಿ ನಮ್ಮ ಕರ್ನಾಟಕ ರಾಜ್ಯವು ಯಾವ ಸ್ಥಾನವನ್ನು ಪಡೆದುಕೊಂಡಿದೆ?

A). ಮೂರನೇ
B). ಎರೆಡನೇ
C). ನಾಲ್ಕನೆ
D). ಐದನೇ

Correct Ans: (C)
Description: ನಮ್ಮ ಕರ್ನಾಟಕ ರಾಜ್ಯವು ಈ ಯೋಜನೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಹತ್ತು ಲಕ್ಷ ರೂ ಗಿಂತ ಹೆಚ್ಚು ಆದಾಯವಿರುವ ಸಬ್ಸಿಡಿ ತ್ಯಾಗಕ್ಕೆ ಈಗಾಗಲೇ ಕೇಂದ್ರ ಇಂಧನ ಸಚಿವಾಲಯ ಈ ಹಿಂದೆ ಅಧಿಕೃತ ಸೂಚನೆ ನೀಡಿತ್ತು.

19) ‘ಹ್ಯಾರಿ ಪಾಟರ್ ಅಂಡ್ ದಿ ಕರ್ಸ್ಡ್‌ ಚೈಲ್ಡ್‌’ ಈ ಕೃತಿಯ ಲೇಖಕರು ಯಾರು?

A). ಸಲ್ಮಾನ್ ರಶ್ದಿ
B). ಅರುಂಧತಿ ರಾಯ್
C). ಕಿರಣ್ ದೇಸಾಯಿ
D). ಜೆ.ಕೆ ರೌಲಿಂಗ್

Correct Ans: (D)
Description: ಹ್ಯಾರಿ ಪಾಟರ್ ಸೃಷ್ಟಿಕರ್ತೆ ಜೆ.ಕೆ. ರೋಲಿಂಗ್ ತಮ್ಮ ವಿಶ್ವಪ್ರಸಿದ್ಧ ಸರಣಿಯನ್ನು ಈ ಬಾರಿ ನಾಟಕದ ರೂಪದಲ್ಲಿ ಕೊಟ್ಟಿದ್ದಾರೆ. ‘ಹ್ಯಾರಿ ಪಾಟರ್ ಅಂಡ್ ದಿ ಕರ್ಸ್ಡ್‌ ಚೈಲ್ಡ್‌’ ಇದರ ಹೆಸರು. ಹೊಸ ಪುಸ್ತಕ ಖರೀದಿಸಲು ಸಿಂಗಪುರದಲ್ಲಿ ಜನ ಬೆಳಗಿನ ಜಾವ ಐದು ಗಂಟೆಗೇ ಪುಸ್ತಕದ ಅಂಗಡಿ ಎದುರು ಕಾದು ನಿಂತಿದ್ದರು. ಲಂಡನ್ನಿ ನಲ್ಲಿ ಮಧ್ಯರಾತ್ರಿಯಲ್ಲೇ ಪುಸ್ತಕ ಖರೀದಿಸಿದರು.

20) ಪ್ರಧಾನಿ ನರೇಂದ್ರ ಮೋದಿಯವರ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದವರು ಯಾರು?

A). ಭಾಸ್ಕರ್ ಕುಲ್ಬೆ
B). ಮಹೇಂದ್ರ ಸಿಂಘ್ವಿ
C). ಮಹೇಶ್ ಬಾಜ್ಪೆ
D). ಹರೀಶ್ ಸಿಂಗ್

Correct Ans: (A)                        
[11:15 AM, 9/1/2016] +91 87923 18784: Date 30/08/2016

ಉತ್ತರಗಳು

1)ಧ್ವಜ ಸತ್ಯಾಗ್ರಹ ನಡೆದ ಶಿವಪುರ ಸದ್ಯ ಈ ಜಿಲ್ಲೆಯಲ್ಲಿದೆ
ಎ)ಮೈಸೂರು
ಬಿ)ಚಾಮರಾಜನಗರ
ಸಿ)ಹಾಸನ
ಡಿ)ಮಂಡ್ಯ
ಡಿ✔
2)ಬಹುಮನಿ ವಂಶದ ನಂತರ ಕರ್ನಾಟಕ ರಾಜ್ಯವಾಳಿದ ಅರಸರು ಇವರು
ಎ)ಚಾಲುಕ್ಯ
ಬಿ)ರಾಷ್ಟ್ರಕೂಟ
ಸಿ)ಆದಿಲ್ ಶಾಹಿ
ಡಿ)ವಿಜಯನಗರ
ಸಿ✔
3)ಮೊದಲು ಸ್ವಾತಂತ್ರ್ಯ ಸಮರ ಯಾವ ವರ್ಷ ನಡೆಯಿತು?
ಎ)1947
ಬಿ)1847
ಸಿ)1857
ಡಿ)1775
ಸಿ✔
4)ಬೇಲೂರು ಯಾವುದಕ್ಕೆ ಹೆಸರುವಾಸಿಯಾಗಿದೆ?
ಎ)ಸರೋವರಗಳು
ಬಿ)ದೇವಾಲಯಗಳು
ಸಿ)ಆಣೆಕಟ್ಟುಗಳು
ಡಿ)ಮೇಲಿನ ಯಾವುದೊ ಅಲ್ಲ
ಬಿ✔
5)ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ಯುದ್ಧ ಯಾವುದು?
ಎ)ಮೈಸೂರು ಯುದ್ಧ
ಬಿ)ರಕ್ಕಸತಂಗಡಿ ಯುದ್ಧ
ಸಿ)ವಿಜಯನಗರ ಯುದ್ಧ
ಡಿ)ಪಾನಿಪತ್ ಯುದ್ಧ
ಬಿ✔
6)ಹರಪ್ಪ ನಾಗರಿಕತೆಯ ಪ್ರಮುಖ ನಿವೇಶನಗಳಲ್ಲೊಂದಾದ ಲೋಥಾಲ್ ಅನ್ನು ಉತ್ಖನನ ಮಾಡಿದವರು?
ಎ)ಸರ್.ಡಿ .ಬ್ಯಾನರ್ಜಿ
ಬಿ)ಸರ್.ಜಾನ್ ಮಾರ್ಷಲ್
ಸಿ)ಎಸ್.ಆರ್.ರಾವ್
ಡಿ)ಎಲ್ಲರೂ
ಸಿ✔
7)ಕುತುಬ್ ಮೀನಾರ್ ಬಳಿ ಇರುವ ಪ್ರಸಿದ್ಧವಾದ ಉಕ್ಕಿನ ಸ್ತಂಭ ಯಾರಿಗೆ ಸೇರಿದ್ದು?
ಎ)ಮೌರ್ಯರು
ಬಿ)ಗುಪ್ತರು
ಸಿ)ಚಾಣಕ್ಯರು
ಡಿ)ಕುಶಾನರು
ಬಿ✔
8)ಬ್ರಿಟಿಷ್ ಸರ್ಕಾರ ಭಾರತ ಸಾಮ್ರಾಜ್ಯವನ್ನು ಯಾವಾಗ ತನ್ನ ನಿಯಂನಿಯಂತ್ರಣಕ್ಕೆ ತೆಗೆದುಕೊಂಡಿತು?
ಎ)1857
ಬಿ)1858
ಸಿ)1859
ಡಿ)1757
ಬಿ✔
9)ಅಶೋಕನ ಶಾಸನಗಳ ಲಿಪಿ ಅಲ್ಲದೆ ಇರುವ ಲಿಪಿಯನ್ನು ಗುರುತಿಸಿ
ಎ)ಖರೋಷ್ಟಿ
ಬಿ)ಬ್ರಾಹ್ಮೀ
ಸಿ)ದೇವನಾಗರಿ
ಡಿ)ಮೇಲಿನ ಎಲ್ಲವೂ
ಸಿ✔
10)ಮಗಧ ಸಾಮ್ರಾಜ್ಯದ ಮೊಟ್ಟಮೊದಲ ರಾಜಧಾನಿ ಯಾವುದು?ಗುರುತಿಸಿ
ಎ)ರಾಜಗೀರ್
ಬಿ)ಪಾಟಲೀಪುತ್ರ
ಸಿ)ಕಪಿಲವಸ್ತು
ಡಿ)ಭಿಲಸ
ಎ✔

No comments:

Post a Comment